ಮನೆ ಕಟ್ಟಿಸೋದು ಮಕ್ಕಳಾಟಿಕೆ ಅಲ್ಲ..ಆದ್ದರಿಂದ ಸರಕಾರ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಈಗಿಂದ್ದೀಗೆ ಮನೆ ಮಾಡಿ ಕೊಡುತ್ತೇವೆ ಎಂದು ಹೇಳಿದರೆ ಅದು ಜಸ್ಟ್ ಇಂಪಾಸಿಬಲ್.
ಮೊನ್ನೆ ಮೊನ್ನೆ ಬಂದ ಬಂದು ಹೋದ ಮಹಾ ಪ್ರಳಯಕ್ಕೆ ಉತ್ತರ ಕರ್ನಾಟಕದ ಬಳ್ಳಾರಿ,ಗುಲಬರ್ಗಾ,ಕೊಪ್ಪಳ,ರಾಯಚೂರು,ಬೆಳಗಾವಿ,ಗದಗ,ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪುನರ್ವಸತಿಯ ಮಹಾ ಅಭಿಯಾನಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳು,ದಾನಿಗಳು ತಯಾರಾಗಿದ್ದಾರೆ.
ಸರಕಾರವೇ ಹೇಳೋ ಪ್ರಕಾರ ಈಗ ತತ್ಕ್ಷಣಕ್ಕೆ ಎರಡು ಲಕ್ಷ ಮನೆ ತಯಾರಾಗಬೇಕು..ಅದಕ್ಕಾಗಿ ೧೨ ಸಾವಿರ ಎಕರೆ ಜಮೀನು ಬೇಕು.೨೫೦ ಚದರಡಿಯಯ ಮನೆಯೊಂದನ್ನು ಮನೆ ಕಳೆದುಕೊಂಡವರಿಗೆ ಸರಕಾರ ಕಟ್ಟಿಸಿಕೊಡುತ್ತದೆ.ಅದರಲ್ಲಿ ಒಂದು ಕೊಠಡಿ,ಒಂದು ಕಿಚನ್ ಒಂದು ಬಾತ್ರೂಮು ಮತ್ತು ಒಂದು ಶೌಚಾಲಯ ಇರುತ್ತದೆ.ಮನೆಗೆ ತಗಲುವ ಖರ್ಚಿನಲ್ಲಿ ಅರ್ಧದಷ್ಟು ಸರಕಾರ ಭರಿಸುತ್ತದೆ ಉಳಿದರ್ಧ ದಾನಿಗಳಿಂದ ಬರುತ್ತದೆ.
ಎಲ್ಲ ಚೆನ್ನಾಗಿದೆ. ದುಡ್ಡೂ ಇದೆ.ಆದರೆ ಎರಡು ಲಕ್ಷ ಮನೆ ಫಟಾಫಟ್ ಅಂತ ಕಟ್ಟೋದು ಇದು ಎಷ್ಟು ಸಾಧ್ಯ..?ಮತ್ತು ಇದು ಸಾಧುವೇ?
ಮನೆ ಕಟ್ಟಿಸುವುದು ಎಂದರೆ ತಮಾಶೆ ಏನಲ್ಲ..ಅದರಲ್ಲೂ ಸರ್ವಸ್ವವನ್ನೂ ಕಳೆದುಕೊಂಡವರಿಗೆ ದಿಢೀರ್ ಅಂತ ಮನೆ ಮಾಡಿ ಕೊಡಲು ಸಾಕ್ಷಾತ್ ಮಯನಿಗೂ ಸಾಧ್ಯವಿಲ್ಲ.
ಮೊದಲಾಗಿ ಕಟ್ಟಬೇಕಾಗಿರೋದು ಮನ,ಮನೆಯಲ್ಲ.ಆಯಿತು ಮನೆಯೇ ಕಟ್ಟುತ್ತಿರಿ ಎಂದುಕೊಳ್ಳಿ,
ಸರಕಾರವೇ ತಾನಾಗಿ ಕಟ್ಟಬಾರದು, ಕಳೆದುಕೊಂಡವರಿಂದಲೇ ಅವರಿಗೆ ಬೇಕಾದಂಥ ಮನೆ ಕಟ್ಟಿಸಬೇಕು.
ಅದರರ್ಥ ಇಷ್ಟೇ,ಎಲ್ಲವೂ ಒಂದೇ ಥರ ಮನೆ ಆಗೋದಿಲ್ಲ..ಯಾರಿಗೆ ಎಂಥ ಮನೆ ಎಂಬ ಕಲ್ಪನೆ ಮೊದಲಾಗಿ ಬೇಕು.ಅದಕ್ಕಾಗಿ ಮೊದಲು ದೊಡ್ಡ ಮಟ್ಟದಲ್ಲಿ ಸರ್ವೇಕಾರ್ಯ ನಡೆಯಬೇಕು.ಸುಮ್ಮನೇ ಸರ್ವೇ ಮಾಡಿದರೆ ಆಗೋದಿಲ್ಲ..ತಾಂತ್ರಿಕ ಗುಣಾಢ್ಯತೆಯ ಸರ್ವೇ ಆಗಬೇಕು..ಮನೆ ಬೇಕಾದವರ ಸಾಮಾನ್ಯ ಬೇಡಿಕೆ ಒಂದೇ ರೀತಿ ಇರಲಾರದು.ಮನೆ ಕಳೆದುಕೊಂಡವರೆಲ್ಲಾ ಒಂದೇ ವರ್ಗದವರಲ್ಲ,ಒಂದೇ ಕಸುಬಿನವರೂ ಅಲ್ಲ..ಅವರವರ ಜೀವನ ಶೈಲಿ,ಅವರವರ ಜೀವನ ಕ್ರಮ ಅಧ್ಯಯನ ಮಾಡಬೇಕು..
ದನ,ಕೋಳಿ ಆಡು ಸಾಕುವವರಿಗೂ ಗ್ರಾಮಪಂಚಾಯತ್ನ ದಿನಗೂಲಿ ಕಾರ್ಮಿಕನಿಗೂ,ದೇವಸ್ಥಾನದ ಅರ್ಚಕನಿಗೂ ಒಂದೇ ರೀತಿಯ ಮನೆ ಮಾಡಿಕೊಟ್ಟರೆ ಆಗುತ್ತದೆಯೇ?
ಹಾಗೆಂದು ತುಘಲಕ್ ಮಾಡಿದಂತೆ ಎಲ್ಲರನ್ನೂ ನದಿ ಪಾತ್ರದಿಂದ ಎತ್ತಿ ದೂರಕ್ಕೆ ಸಾಗಿಸಿದರೆ ಅದು ಸಾಧುವಲ್ಲ.ನೂರು ವರ್ಷಕ್ಕೊಮ್ಮೆ ಬರೋ ನೆರೆಗೆ ದೂರ ಓಡಿಹೋಗುವುದೂ ತರವಲ್ಲ.ಸುನಾಮಿ ಬರುತ್ತದೆ ಎಂದು ಸಮುದ್ರ ದಂಡೆಯ ಜನರನ್ನು ಬೆಟ್ಟದಲ್ಲಿ ಕೂರಿಸಿದರೆ ಆಗುತ್ತದಾ?ಅವರಿಗೆ ಸಮುದ್ರ ಬಿಟ್ಟು ಬದುಕುವುದಕ್ಕೆ ಗೊತ್ತಿಲ್ಲ.ಹಾಗೆಯೇ ಈ ತನಕ ಅವರು ಬದುಕುತ್ತಿದ್ದ್ದ ನೆಲದಿಂದ ಅವರನ್ನು ದೂರ ಮಾಡಿದರೆ ಅವರಿಗೆ ಮುಂದೆ ಬದುಕುವುದನ್ನು ಕಲಿಸುವುದು ಯಾರು?
ಒಂದು ಮನೆ ಕಟ್ಟಿಸಲು ಶೇಕಡಾ ೨೫ ರಷ್ಟು ಲೇಬರ್ ಬೇಕು.ಒಂದು ಸರಕಾರ ಕಟ್ಟಿಸೋ ಸಂತ್ರಸ್ತರ ಒಂದು ಮನೆಗೆ ನೂರು ಲೇಬರ್ ಬೇಕು.ಅಂದರೆ ಎರಡು ಲಕ್ಷ ಮನೆ ನಿರ್ಮಾಣಕ್ಕೆ ಎರಡು ಕೋಟಿ ಮಾನವ ದಿನಗಳು ಅಂದರೆ ಲೇಬರ್ ಬೇಕು.ಅಷ್ಟೊಂದು ಲೇಬರ್ ಶಕ್ತಿ ಸರಕಾರದ ಬಳಿ ಪೂರೈಸಲು ಆಗುತ್ತದೆಯೇ?
ಹಾಗೇ ಮಾಡಿದಾಗ ನಿರ್ಗತಿಕರಾದ ಅವರಿಗೆ ಕೆಲಸ ಸಿಗುತ್ತದೆ,ದುಡಿಯುವ ಸಂಸ್ಕೃತಿ ಹುಟ್ಟುತ್ತದೆ,ತನ್ನ ಮನೆಯನ್ನು ತಾನೇ ಕಟ್ಟಿಸಿದ ಮತ್ತು ತನಗೆ ಬೇಕಾದ ರೀತಿಯಲ್ಲಿ ಕಟ್ಟಿಸಿದ ತೃಪ್ತಿಯೂ ಬರುತ್ತದೆ.
ಮನೆ ಕಟ್ಟುವುದು ಎಂದರೆ ಅದು ಮನಸ್ಸನ್ನು ಕಟ್ಟುವುದೂ ಆಗಿದೆ.
ಒಮ್ಮಿಂದೊಮ್ಮೆಗೇ ಎರಡು ಲಕ್ಷ ಮನೆ ಕಟ್ಟಲು ಬೇಕಾದ ಮಾನಸಿಕತೆಯೇ ನಮ್ಮಲ್ಲಿ ಸಿದ್ಧವಾಗಿಲ್ಲ.ಮೆಟೀರಿಯಲ್ಲೂ ಇಲ್ಲ.ಇನ್ನೂರೈವತ್ತು ಚದರಡಿಯ ಮನೆ ನಿರ್ಮಾಣಕ್ಕೆ ಏನಿಲ್ಲಾ ಎಂದರೂ ಒಂದು ಸಾವಿರ ಇಟ್ಟಿಗೆ ಬೇಕು.ಎರಡು ಲಕ್ಷ ಮನೆಗಳಿಗೆ ೨೦ ಕೋಟಿ ಇಟ್ಟಿಗೆ ಬೇಕು.೨೦ ಕೋಟಿ ಎಲ್ಲಿ ಸಿಗುತ್ತದೆ?ಇಟ್ಟಿಗೆ ತಯಾರು ಮಾಡಲು ಎಷ್ಟು ಸಮಯ ಮತ್ತು ಶ್ರಮ ಇದೆ ಎಂದು ಲೆಕ್ಕಾಚಾರ ಮಾಡಬೇಕು.ದಿನಕ್ಕೆ ಹತ್ತು ಮಂದಿ ಸೇರಿದರೆ ಒಂದು ಸಣ್ಣ ಯುನಿಟ್ನಲ್ಲಿ ಸಾವಿರ ಇಟ್ಟಿಗೆ ಮಾಡಬಹುದು.೨೦ ಕೋಟಿ ಇಟ್ಟಿಗೆ ತಯಾರಿಸಲು ಬೇಕಾದ ಕಾರಖಾನೆ ಮತ್ತು ಕಚ್ಛಾವಸ್ತು ಮತ್ತು ಕಾರ್ಮಿಕರು ನಮ್ಮಲಿದ್ದಾರೆಯೇ? ೨೦ ಕೋಟಿ ಇಟ್ಟಿಗೆ ತಯಾರಿಸಲು ಎರಡು ಲಕ್ಷ ಕಾರ್ಮಿಕರು ಬೇಕು.ಅದನ್ನು ಪೂರೈಸುವವರು ಎಲ್ಲಿದ್ದಾರೆ.?
ಇದನ್ನು ಬಿಟ್ಟು ನೇರವಾಗಿ ಮನೆ ಕಟ್ಟಸುವುದಕ್ಕೇ ಬರೋಣ.ದಿನಕ್ಕೆ ಎಷ್ಟು ಅಂತ ಮನೆ ಕಟ್ಟಬಹುದು?ಒಂದು ಟಾರ್ಗೆಟ್ ಅಂತ ಬೇಡವೇ?
ವರ್ಷಕ್ಕೆ ಎರಡು ಲಕ್ಷ ಮನೆ ಅಂದರೆ.. ದಿನಕ್ಕೆ ಆರುನೂರು ಮನೆ..ಆಂದರೆ ಆರು ಲಕ್ಷ ಇಟ್ಟಿಗೆ,೨೪೦೦ ಕಿಟಕಿ ಮತ್ತು ಅಷ್ಟೇ ಬಾಗಿಲು,೧೨೦ ಲಕ್ಷ ಲೀಟರ್ ನೀರು ಬೇಕಾಗುತ್ತದೆ.ಅಷ್ಟನ್ನೂ ಪೂರೈಸಲು ಸಾಧ್ಯವೆಂದಾದರೆ ವರ್ಷಕ್ಕೆ ಲಕ್ಷ ಮನೆ ಮನೆ ಮಾಡಿಕೊಡಬಹುದು ಅಷ್ಟೇ.
.ಬದುಕುವ ಪಾಠ ಹೇಳಿಕ॒ಳೆದುಕೊಂಡದ್ದನ್ನು ಮರಳಿ ಪಡೆಯಲು ಬೇಕಾದ ನೈತಿಕ ಶಕ್ತಿ ತುಂಬಿ, ಮೊದಲು ಮನಸ್ಸು ಗಟ್ಟಿಯಾಗಲಿ,ಮನೆ ಆಮೇಲೆ ಕಟ್ಟಿಸೋಣ..
20091104
Subscribe to:
Posts (Atom)